ಹರಿಯ ನಂಬಿದವರಿಗೆ

ಹರಿಯ ನಂಬಿದವರಿಗೆ ಮೋಸವಿಲ್ಲ|
ಹರಿಯ ನಂಬಂದಲೇ
ಮೋಸಹೋದರು ಎಲ್ಲಾ|
ಹರಿಯ ನಂಬಲೇ ಬೇಕು
ಸತ್ಯವನರಿಯಲು ಬೇಕು||

ಹರಿಯ ನಂಬಿ ಪಾಂಡವರು
ಸಕಲವನು ಮರಳಿ ಪಡೆದರು|
ಹರಿಯ ನಂಬದಲೆ ಕೌರವರು
ರಾಜ್ಯಕೋಶ, ಪ್ರಾಣಗಳ ಕಳಕೊಂಡರು|
ಹರಿಯ ನಂಬಿ ಅಜಮಿಳನು
ಮೋಕ್ಷದಯಪಾಲಿಸಿಕೊಂಡನು|
ಹರಿಯ ನಂಬಿ ಕನಕದಾಸರು
ಶ್ರೀ ಹರಿಯ ದರುಶನಭಾಗ್ಯ ಪಡೆದರು ||

ಹರಿಯಪಾದ ನಂಬಿ ಬಲಿಚಕ್ರವರ್ತಿಯು
ಶ್ರೀ ಹರಿಯ ಪಾದವ ಸೇರಿಕೊಂಡನು|
ಹರಿಯ ನಂಬದಲೆ ಕರ್ಣನು ತನ್ನ
ಅವಸಾನವನು ತಾನೇ ತಂದುಕೊಂಡನು|
ಹರಿಯ ಸೇವೆಯ ಮಾಡಿ
ಗೊರ ಕುಂಬಾರನು ಕಷ್ಟಸಮಯದಿ
ಹರಿಸೇವೆಯನು ಪಡೆದನು||

ಹರಿಯ ನಂಬಿ ಶ್ರೀಪುರಂದರದಾಸರು
ಸಕಲ ಸಂಪತ್ತ ಹರಿಗೆ ಅರ್ಪಿಸಿ
ಆನಂದವ ಅನುಭವಿಸಿದರು|
ಹರಿಯ ನಂಬದೆ ಮಾವ ಕಂಸ
ಹರಿಯ ನಂಬದ ಹತ್ತುತಲೆಯ ರಾವಣ
ಹರಿಯಿಂದಲೇ ಹತರಾದರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಸ್ತೆಗಿಳಿಯಲಿದೆ ೫ ಕೋಟಿಯ ‘ಮೇಬ್ಯಾಚ್’ ಕಾರು
Next post ತಬ್ಬಲಿ ಮಗು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys